1
1
ರಾಂಚಿ: ಜಾರ್ಖಂಡ್ನ ಛತ್ರ ಜಿಲ್ಲೆಯಲ್ಲಿ ಇಂದು ಸಂಜೆ ಏರ್ ಆಂಬ್ಯುಲೆನ್ಸ್ ವಿಮಾನವೊಂದು ಪತನವಾಗಿದೆ ಎಂದು DGCA ದೃಢಪಡಿಸಿದೆ. ರೆಡ್ಬರ್ಡ್ ಏರ್ವೇಸ್ ಪ್ರೈವೇಟ್ ಲಿಮಿಟೆಡ್ಗೆ ಸೇರಿದ ಈ ವಿಮಾನದಲ್ಲಿ ರೋಗಿ ಸೇರಿದಂತೆ ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದರು.
ಈ ವಿಮಾನವು ಜಾರ್ಖಂಡ್ನ ರಾಜಧಾನಿ ರಾಂಚಿಯಿಂದ ಸಂಜೆ 7:11ಕ್ಕೆ ದೆಹಲಿಯೆಡೆ ಟೇಕ್ ಆಫ್ ಆಗಿತ್ತು. ವಿಮಾನವು ಹಾರಾಟ ಆರಂಭಿಸಿದ ನಂತರ ಕೋಲ್ಕತ್ತಾ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಸಾಧಿಸಿತ್ತು. ಆದರೆ, ರಾತ್ರಿ 7:34 ರ ಸುಮಾರಿಗೆ ವಾರಣಾಸಿಯಿಂದ ಸುಮಾರು 100 ನಾಟಿಕಲ್ ಮೈಲಿ ದೂರದಲ್ಲಿ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ರಡಾರ್ ಮತ್ತು ಸಂವಹನ ಸಂಪರ್ಕ ಕಳೆದುಕೊಂಡು ಪತನಗೊಂಡಿದೆ ಎಂದು ಡಿಜಿಸಿಎ ತಿಳಿಸಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.