ಬ್ರೇಕಿಂಗ್
ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ಟ ಸಿದ್ದರಾಮಯ್ಯ: ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಾಯಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಸಿದ್ದರಾಮಯ್ಯ? ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆನೀಟ್‌ನಲ್ಲಿ ಕಡಿಮೆ ಅಂಕ ಭಯ: ಮನೆಬಿಟ್ಟು ಹೋದ ಬಾಲಕ ಸಕಲೇಶಪುರದಲ್ಲಿ ಪತ್ತೆಉಡುಪಿ ಸಿಟಿ ಬಸ್ ನಿಲ್ದಾಣ ಬಳಿಯ ಖಾದರ್ ಬಿಲ್ಡಿಂಗ್ ನಲ್ಲಿ ಭಾರೀ ಅಗ್ನಿ ಅವಘಡ- ಐದಕ್ಕೂ ಹೆಚ್ಚು ಅಂಗಡಿ ಮಳಿಗೆ ಅಗ್ನಿಗಾಹುತಿಶ್ರೀ ಪ್ರಮೋದ್ ಮಧ್ವರಾಜ್ ಅವರ ಜೇಕಬ್ & ಕೋ ರಾಮ ಮಂದಿರ ಎಡಿಷನ್ ವಾಚ್ಕುಂದಾಪುರ | ಬಸ್ ಕಂಡಕ್ಟರ್ ಮಗ ಪ್ರೀತಮ್ ಜಿ. ಪೂಜಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್!ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ಟ ಸಿದ್ದರಾಮಯ್ಯ: ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಾಯಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಸಿದ್ದರಾಮಯ್ಯ? ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆನೀಟ್‌ನಲ್ಲಿ ಕಡಿಮೆ ಅಂಕ ಭಯ: ಮನೆಬಿಟ್ಟು ಹೋದ ಬಾಲಕ ಸಕಲೇಶಪುರದಲ್ಲಿ ಪತ್ತೆಉಡುಪಿ ಸಿಟಿ ಬಸ್ ನಿಲ್ದಾಣ ಬಳಿಯ ಖಾದರ್ ಬಿಲ್ಡಿಂಗ್ ನಲ್ಲಿ ಭಾರೀ ಅಗ್ನಿ ಅವಘಡ- ಐದಕ್ಕೂ ಹೆಚ್ಚು ಅಂಗಡಿ ಮಳಿಗೆ ಅಗ್ನಿಗಾಹುತಿಶ್ರೀ ಪ್ರಮೋದ್ ಮಧ್ವರಾಜ್ ಅವರ ಜೇಕಬ್ & ಕೋ ರಾಮ ಮಂದಿರ ಎಡಿಷನ್ ವಾಚ್ಕುಂದಾಪುರ | ಬಸ್ ಕಂಡಕ್ಟರ್ ಮಗ ಪ್ರೀತಮ್ ಜಿ. ಪೂಜಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್!
August 26, 2026 ಲೈವ್ ಅಪ್‌ಡೇಟ್
KT.Media
ಕರ್ನಾಟಕದ ನಂಬಿಕೆಯ ಡಿಜಿಟಲ್ ಸುದ್ದಿ ವೇದಿಕೆ
ಮೆನು
Live
KT.Media ← ಮುಖಪುಟ
ಮುಖಪುಟ ಕುಂದಾಪುರ

ನೀಟ್‌ನಲ್ಲಿ ಕಡಿಮೆ ಅಂಕ ಭಯ: ಮನೆಬಿಟ್ಟು ಹೋದ ಬಾಲಕ ಸಕಲೇಶಪುರದಲ್ಲಿ ಪತ್ತೆ

B
Babu
May 5, 2026 · 1 ನಿಮಿಷ
Spread the love

ಕೋಟ: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಭಯದಿಂದ ಮನೆ ಬಿಟ್ಟು ಹೋಗಿದ್ದ ಬಾಲಕನನ್ನು ಕೋಟೆ ಠಾಣೆ ಪೊಲೀಸರು 24 ಗಂಟೆಗಳೊಳಗೆ ಪತ್ತೆ ಹಚ್ಚಿದ್ದಾರೆ.

ಸಕಲೇಶಪುರದಲ್ಲಿ ಪತ್ತೆಯಾದ ಬಾಲಕನನ್ನು ಪೊಲೀಸರು ವಾಪಸು ಕರೆದುಕೊಂಡು ಬಂದಿದ್ದಾರೆ. ಮಂಗಳವಾರ ನೀಟ್ ಪರೀಕ್ಷೆ ಬರೆಯಿದ ಬಾಲಕ ಅಭಿಷೇಕ್ (17) ಸೋಮವಾರ ಮಧ್ಯಾಹ್ನ ಸುಮಾರು 3.30ರ ವೇಳೆಗೆ ಮನೆಬಿಟ್ಟು ಹೊರಟು ಹೋಗಿದ್ದನು. ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಸಿಗಲಿಲ್ಲ ಎಂಬ ಆತಂಕದಿಂದ ಮನೆಯಲ್ಲಿ ಯಾರಿಗೂ ಹೇಳದೇ ಹೊರಟಿದ್ದಾನೆ ಎಂದು ತಿಳಿದುಬಂದಿದೆ.

ಬಾಲಕ ಕಾಣೆಯಾಗಿರುವ ಬಗ್ಗೆ ಪೋಷಕರು ಕೋಟೆ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಾಚರಣೆ ಆರಂಭಿಸಿ, ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿದರು. ನಂತರ ಸಕಲೇಶಪುರದಲ್ಲಿ ಬಾಲಕ ಇರುವುದನ್ನು ಪತ್ತೆ ಹಚ್ಚಿ, ಸುರಕ್ಷಿತವಾಗಿ ಮನೆಗೆ ಕರೆತಂದಿದ್ದಾರೆ.

ಈ ಕುರಿತು ಮಾತನಾಡಿದ ಪೊಲೀಸರು, “ನಾಪತ್ತೆಯಾಗಿರುವ ಬಾಲಕನನ್ನು 24 ಗಂಟೆಗಳೊಳಗೆ ಪತ್ತೆ ಹಚ್ಚಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶಗಳ ಬಗ್ಗೆ ಅತಿಯಾಗಿ ಆತಂಕಪಡದೆ, ಪೋಷಕರೊಂದಿಗೆ ಮುಕ್ತವಾಗಿ ಮಾತನಾಡಬೇಕು” ಎಂದು ತಿಳಿಸಿದ್ದಾರೆ.

ಪೊಲೀಸರ ಈ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *