ಬ್ರೇಕಿಂಗ್
ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ಟ ಸಿದ್ದರಾಮಯ್ಯ: ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಾಯಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಸಿದ್ದರಾಮಯ್ಯ? ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆನೀಟ್‌ನಲ್ಲಿ ಕಡಿಮೆ ಅಂಕ ಭಯ: ಮನೆಬಿಟ್ಟು ಹೋದ ಬಾಲಕ ಸಕಲೇಶಪುರದಲ್ಲಿ ಪತ್ತೆಉಡುಪಿ ಸಿಟಿ ಬಸ್ ನಿಲ್ದಾಣ ಬಳಿಯ ಖಾದರ್ ಬಿಲ್ಡಿಂಗ್ ನಲ್ಲಿ ಭಾರೀ ಅಗ್ನಿ ಅವಘಡ- ಐದಕ್ಕೂ ಹೆಚ್ಚು ಅಂಗಡಿ ಮಳಿಗೆ ಅಗ್ನಿಗಾಹುತಿಶ್ರೀ ಪ್ರಮೋದ್ ಮಧ್ವರಾಜ್ ಅವರ ಜೇಕಬ್ & ಕೋ ರಾಮ ಮಂದಿರ ಎಡಿಷನ್ ವಾಚ್ಕುಂದಾಪುರ | ಬಸ್ ಕಂಡಕ್ಟರ್ ಮಗ ಪ್ರೀತಮ್ ಜಿ. ಪೂಜಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್!ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ಟ ಸಿದ್ದರಾಮಯ್ಯ: ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಾಯಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಸಿದ್ದರಾಮಯ್ಯ? ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆನೀಟ್‌ನಲ್ಲಿ ಕಡಿಮೆ ಅಂಕ ಭಯ: ಮನೆಬಿಟ್ಟು ಹೋದ ಬಾಲಕ ಸಕಲೇಶಪುರದಲ್ಲಿ ಪತ್ತೆಉಡುಪಿ ಸಿಟಿ ಬಸ್ ನಿಲ್ದಾಣ ಬಳಿಯ ಖಾದರ್ ಬಿಲ್ಡಿಂಗ್ ನಲ್ಲಿ ಭಾರೀ ಅಗ್ನಿ ಅವಘಡ- ಐದಕ್ಕೂ ಹೆಚ್ಚು ಅಂಗಡಿ ಮಳಿಗೆ ಅಗ್ನಿಗಾಹುತಿಶ್ರೀ ಪ್ರಮೋದ್ ಮಧ್ವರಾಜ್ ಅವರ ಜೇಕಬ್ & ಕೋ ರಾಮ ಮಂದಿರ ಎಡಿಷನ್ ವಾಚ್ಕುಂದಾಪುರ | ಬಸ್ ಕಂಡಕ್ಟರ್ ಮಗ ಪ್ರೀತಮ್ ಜಿ. ಪೂಜಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್!
July 11, 2026 ಲೈವ್ ಅಪ್‌ಡೇಟ್
KT.Media
ಕರ್ನಾಟಕದ ನಂಬಿಕೆಯ ಡಿಜಿಟಲ್ ಸುದ್ದಿ ವೇದಿಕೆ
ಮೆನು
Live
KT.Media ← ಮುಖಪುಟ
ಮುಖಪುಟ ಉಡುಪಿ

ಉಡುಪಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವೆ ರಸ್ತೆ ಅಪಘಾತಗಳು. ತಡೆಗಟ್ಟಲು ನಾಗರಿಕರ ಸಹಕಾರ ಅಗತ್ಯ

B
Babu
Feb 18, 2026 · 2 ನಿಮಿಷ

ಸಂಗ್ರಹ ಚಿತ್ರ · KT Media

Spread the love

ಉಡುಪಿ:
ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ರಾಷ್ಟ್ರೀಯ ಹೆದ್ದಾರಿ–66, ಉಡುಪಿ ,ಕುಂದಾಪುರ, ಬೈಂದೂರಿನ ಪ್ರಮುಖ ರಸ್ತೆಗಳು ಸೇರಿದಂತೆ ಹಳ್ಳಿಗಳನ್ನು ಬೆಸೆಯುವ ಸಂಚಾರ ಮಾರ್ಗಗಳಲ್ಲಿಯೂ ಕೂಡ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಮೂಲ್ಯ ಜೀವಹಾನಿಯಾಗುತ್ತಿರುವುದು ಸಾರ್ವಜನಿಕರಲ್ಲಿ ಚಿಂತೆ ಮೂಡಿಸಿದೆ.

ಪೊಲೀಸ್ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಅಪಘಾತಗಳಿಗೆ ಪ್ರಮುಖವಾಗಿ ಅತಿವೇಗ, ಮದ್ಯಪಾನ ಮಾಡಿ ವಾಹನ ಚಾಲನೆ, ಹೆಲ್ಮೆಟ್ ಹಾಗೂ ಸೀಟ್‌ಬೆಲ್ಟ್ ಬಳಸದಿರುವುದು, ಮೊಬೈಲ್ ಫೋನ್ ಬಳಕೆ ಮಾಡಿಕೊಂಡೇ ಚಾಲನೆ ಮಾಡುವ ಪ್ರವೃತ್ತಿ ಹಾಗೂ ಅಜಾಗರೂಕ ಚಾಲನೆಗಳೆ ಕಾರಣವೆಂದು ಗುರುತಿಸಲಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ರಸ್ತೆ ಕಾಮಗಾರಿಯಿಂದ ಉಂಟಾದ ಅಸಮತೋಲನ ಹಾಗೂ ರಾತ್ರಿ ವೇಳೆ ಸರಿಯಾದ ಬೆಳಕು ಇಲ್ಲದಿರುವುದೂ ಹಾಗೂ ಮಿತಿಮೀರಿದ ಎಲ್‌ಇಡಿ ಹೆಡ್‌ಲ್ಯಾಂಪ್ಗಳ ಬಳಕೆಯೂ ಕೂಡ ಅಪಘಾತಗಳಿಗೆ ಕಾರಣವಾಗುತ್ತಿದೆ.

ನಾಗರಿಕರು ಕೈಗೊಳ್ಳಬೇಕಾದ ಜಾಗೃತಾ ಕ್ರಮಗಳು.

ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾನೂನು ಪಾಲನೆ ಮಾತ್ರವಲ್ಲದೆ ಸಾರ್ವಜನಿಕರ ಜವಾಬ್ದಾರಿಯುತ ವರ್ತನೆಯೂ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾಗರಿಕರು ಕೆಳಕಂಡ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕೆಂದು ಸಂಚಾರ ತಜ್ಞರು ಸಲಹೆ ನೀಡಿದ್ದಾರೆ.

01. ಅತಿವೇಗ ತಪ್ಪಿಸಿ:

ನಿಗದಿತ ವೇಗ ಮಿತಿಯೊಳಗೆ ಮಾತ್ರ ವಾಹನ ಚಾಲನೆ ಮಾಡಬೇಕು. ಸಮಯ ಉಳಿಸುವ ಆತುರವೇ ಅನೇಕ ಬಾರಿ ಅಪಾಯಕ್ಕೆ ಕಾರಣವಾಗುತ್ತದೆ.

 02.  ಹೆಲ್ಮೆಟ್ ಮತ್ತು ಸೀಟ್‌ಬೆಲ್ಟ್ ಕಡ್ಡಾಯ:

ದ್ವಿಚಕ್ರ ವಾಹನ ಚಾಲಕರು ಹಾಗೂ ಪ್ರಯಾಣಿಕರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಕಾರು ಚಾಲಕರು ಮತ್ತು ಸಹ ಪ್ರಯಾಣಿಕರು ಸೀಟ್‌ಬೆಲ್ಟ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು.

03. ಮದ್ಯಪಾನ ಮಾಡಿ ವಾಹನ ಚಾಲನೆ ಬೇಡ:

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಅಪಘಾತಕ್ಕೆ ಪ್ರಮುಖ ಕಾರಣಗಳಲ್ಲೊಂದು. ಮದ್ಯ ಸೇವಿಸಿದ್ದಲ್ಲಿ ವಾಹನ ಚಾಲನೆ ಮಾಡದೇ ಪರ್ಯಾಯ ವ್ಯವಸ್ಥೆ ಬಳಸಬೇಕು.

04. ಮೊಬೈಲ್ ಬಳಕೆ ನಿಷೇಧ:

ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್‌ನಲ್ಲಿ ಮಾತನಾಡುವುದು ಅಥವಾ ಸಂದೇಶ ನೋಡುವುದು ಅಪಾಯಕಾರಿ ಪ್ರಕ್ರಿಯೆಯಾಗಿದೆ. ಅಗತ್ಯವಿದ್ದರೆ ವಾಹನ ನಿಲ್ಲಿಸಿ ಬಳಕೆ ಮಾಡಬೇಕು.

05. ರಾತ್ರಿ ವೇಳೆ ಎಚ್ಚರಿಕೆ:

ರಾತ್ರಿ ಸಮಯದಲ್ಲಿ ವೇಗ ಕಡಿಮೆ ಮಾಡಿಕೊಂಡು ಚಾಲನೆ ಮಾಡಬೇಕು. ಹೆಡ್‌ಲೈಟ್ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಹೆಚ್ಚು ಪ್ರಕರ ಎಲ್‌ಇಡಿ ಗಳನ್ನು ಬಳಸುವುದು ನಿಷೇಧಿಸಬೇಕು.

06. ರಸ್ತೆ ನಿಯಮ ಪಾಲನೆ:

ಸಿಗ್ನಲ್ ಉಲ್ಲಂಘನೆ, ವಿರುದ್ದ ದಿಕ್ಕಿನಲ್ಲಿ ಚಾಲನೆ ಹಾಗೂ ಓವರ್‌ಟೇಕ್ ಮಾಡುವಾಗ ಅಜಾಗರೂಕತೆ ತಪ್ಪಿಸಬೇಕು.

07. ಪಾದಚಾರಿಗಳಿಗೂ ಜವಾಬ್ದಾರಿ :

ರಸ್ತೆ ದಾಟುವಾಗ ಜೀಬ್ರಾ ಕ್ರಾಸಿಂಗ್ ಬಳಸಬೇಕು. ಏಕಾಏಕಿ ರಸ್ತೆ ದಾಟುವುದನ್ನು ತಪ್ಪಿಸಬೇಕು.

ಸಾರ್ವಜನಿಕರಿಗೆ ಮನವಿ

ಸಂಚಾರ ಪೊಲೀಸರು ಹಾಗೂ ಜಿಲ್ಲಾಡಳಿತ ಸಾರ್ವಜನಿಕರಿಗೆ, ವಿಶೇಷವಾಗಿ ಯುವ ಚಾಲಕರಿಗೆ, ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ.
“ಅಪಘಾತವನ್ನು ತಡೆಯುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ನಿಯಮ ಪಾಲಿಸಿದರೆ ಮಾತ್ರ ಜೀವ ಉಳಿಯುತ್ತದೆ” ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಸ್ತೆ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಕ್ರಮಗಳ ಜೊತೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಸುರಕ್ಷಿತ ಚಾಲನೆಯೇ ಸುರಕ್ಷಿತ ಬದುಕಿಗೆ ಮೂಲಮಂತ್ರ ಎಂಬ ಸಂದೇಶವನ್ನು ಅಧಿಕಾರಿಗಳು ಮತ್ತೊಮ್ಮೆ ನೆನಪಿಸಿದ್ದಾರೆ.

Leave a Reply

Your email address will not be published. Required fields are marked *