ಬ್ರೇಕಿಂಗ್
ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ಟ ಸಿದ್ದರಾಮಯ್ಯ: ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಾಯಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಸಿದ್ದರಾಮಯ್ಯ? ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆನೀಟ್‌ನಲ್ಲಿ ಕಡಿಮೆ ಅಂಕ ಭಯ: ಮನೆಬಿಟ್ಟು ಹೋದ ಬಾಲಕ ಸಕಲೇಶಪುರದಲ್ಲಿ ಪತ್ತೆಉಡುಪಿ ಸಿಟಿ ಬಸ್ ನಿಲ್ದಾಣ ಬಳಿಯ ಖಾದರ್ ಬಿಲ್ಡಿಂಗ್ ನಲ್ಲಿ ಭಾರೀ ಅಗ್ನಿ ಅವಘಡ- ಐದಕ್ಕೂ ಹೆಚ್ಚು ಅಂಗಡಿ ಮಳಿಗೆ ಅಗ್ನಿಗಾಹುತಿಶ್ರೀ ಪ್ರಮೋದ್ ಮಧ್ವರಾಜ್ ಅವರ ಜೇಕಬ್ & ಕೋ ರಾಮ ಮಂದಿರ ಎಡಿಷನ್ ವಾಚ್ಕುಂದಾಪುರ | ಬಸ್ ಕಂಡಕ್ಟರ್ ಮಗ ಪ್ರೀತಮ್ ಜಿ. ಪೂಜಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್!ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ಟ ಸಿದ್ದರಾಮಯ್ಯ: ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಾಯಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಸಿದ್ದರಾಮಯ್ಯ? ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆನೀಟ್‌ನಲ್ಲಿ ಕಡಿಮೆ ಅಂಕ ಭಯ: ಮನೆಬಿಟ್ಟು ಹೋದ ಬಾಲಕ ಸಕಲೇಶಪುರದಲ್ಲಿ ಪತ್ತೆಉಡುಪಿ ಸಿಟಿ ಬಸ್ ನಿಲ್ದಾಣ ಬಳಿಯ ಖಾದರ್ ಬಿಲ್ಡಿಂಗ್ ನಲ್ಲಿ ಭಾರೀ ಅಗ್ನಿ ಅವಘಡ- ಐದಕ್ಕೂ ಹೆಚ್ಚು ಅಂಗಡಿ ಮಳಿಗೆ ಅಗ್ನಿಗಾಹುತಿಶ್ರೀ ಪ್ರಮೋದ್ ಮಧ್ವರಾಜ್ ಅವರ ಜೇಕಬ್ & ಕೋ ರಾಮ ಮಂದಿರ ಎಡಿಷನ್ ವಾಚ್ಕುಂದಾಪುರ | ಬಸ್ ಕಂಡಕ್ಟರ್ ಮಗ ಪ್ರೀತಮ್ ಜಿ. ಪೂಜಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್!
July 11, 2026 ಲೈವ್ ಅಪ್‌ಡೇಟ್
KT.Media
ಕರ್ನಾಟಕದ ನಂಬಿಕೆಯ ಡಿಜಿಟಲ್ ಸುದ್ದಿ ವೇದಿಕೆ
ಮೆನು
Live
KT.Media ← ಮುಖಪುಟ
ಮುಖಪುಟ ಕ್ರೀಡೆ

ಚೇಸಿಂಗ್ ವಿಫಲ : ಭಾರೀ ಅಂತರದಲ್ಲಿ ಸೋತ ಭಾರತ.“ಚೇಸ್ ಮಾಸ್ಟರ್‌” ನನ್ನು ಮಿಸ್ ಮಾಡಿಕೊಂಡ ಟೀಂ ಇಂಡಿಯಾ ಅಭಿಮಾನಿಗಳು.

B
Babu
Feb 22, 2026 · 1 ನಿಮಿಷ

ಸಂಗ್ರಹ ಚಿತ್ರ · KT Media

Spread the love

ಅಹ್ಮದಾಬಾದ್ : ಟಿ20 ಸೂಪರ್​ 8 ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ದಕ್ಷಿಣ ಆಫ್ರಿಕಾ ನೀಡಿದ್ದ 188 ರನ್​ಗಳ ಗುರಿ ಬೆನ್ನಟ್ಟಲು ವಿಫಲವಾದ ಭಾರತ ನೀರಸ ಆಟದೊಂದಿಗೆ ಪೈಪೋಟಿ ನೀಡದೇ ಸೋಲೊಪ್ಪಿಕೊಂಡಿದೆ.
ಟೀಮ್ ಇಂಡಿಯಾ 18.5 ಓವರ್​ಗಳಲ್ಲೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 111 ರನ್​ಗಳಿಸಲಷ್ಟೇ ಶಕ್ತವಾಯಿತು.

ಕಾಡಿದ “ಚೇಸ್ ಮಾಸ್ಟರ್” ಕೊರತೆ..!?

ಟಿ ಟ್ವೆಂಟಿ ಇತಿಹಾಸದಲ್ಲಿಯೇ ಭಾರತ ಅತಿಹೆಚ್ಚು ಕಠಿಣ ಗುರಿಯನ್ನು ಬೆನ್ನಟ್ಟಿದ ದಾಖಲೆ ಹೊಂದಿದೆ‌, ಆದರೆ ಇಂದಿನ ಪಂದ್ಯದ ನೀರಸ ಹಾಗೂ ಜವಾಬ್ದಾರಿಯುತ ಆಟ ಬಾರದೇ ಭಾರತ ಸೋಲೊಪ್ಪಿಕೊಂಡಿದೆ. ಈ ಮಧ್ಯದಲ್ಲೇ ತಂಡದಲ್ಲಿ “ಚೇಸ್ ಮಾಸ್ಟರ್ ” ನ ಕೊರತೆ ಎದ್ದು ಕಾಣುತ್ತಿದ್ದು, ಈ ಹಿಂದೆ ಕಠಿಣ ಗುರಿಗಳನ್ನು ಬೆನ್ನತ್ತಲು ಬೆಂಬಲವಾಗಿದ್ದ ವಿರಾಟ್ ಕೊಹ್ಲಿಯನ್ನು ಭಾರತ ಕ್ರಿಕೆಟ್ ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಿದ್ದಾರೆ‌.

ಟಿ20 ವಿಶ್ವಕಪ್‌ನಲ್ಲಿ ಭಾರತದ ಅತ್ಯಂತ ದೊಡ್ಡ ಚೇಸ್‌ಗಳು ಬಹುತೇಕ ಚೇಸ್ ಮಾಸ್ಟರ್‌ ವಿರಾಟ್ ಕೊಹ್ಲಿಯ ಹೆಸರಿನೊಂದಿಗೇ ಇದೆ.

ವಿರಾಟ್ ಕೊಹ್ಲಿಯ ಕಠಿಣ ಚೇಸಿಂಗ್‌ಗಳು

•   173 ರನ್ಸ್ vs ದಕ್ಷಿಣ ಆಫ್ರಿಕಾ (2014) – ಟಾಪ್ ಸ್ಕೋರರ್: ಕೊಹ್ಲಿ(72*)

•   161 ರನ್ಸ್ vs ಆಸ್ಟ್ರೇಲಿಯಾ (2016) – ಟಾಪ್ ಸ್ಕೋರರ್: ಕೊಹ್ಲಿ (82*)

•   160 ರನ್ಸ್ vs ಪಾಕಿಸ್ತಾನ (2022) – ಟಾಪ್ ಸ್ಕೋರರ್: ಕೊಹ್ಲಿ (82*)

•   139 ರನ್ಸ್ vs ಬಾಂಗ್ಲಾದೇಶ (2014) – ಟಾಪ್ ಸ್ಕೋರರ್: ಕೊಹ್ಲಿ (57*)

ಮೇಲಿನ ಅಂಕಿಅಂಶಗಳನ್ನು ನೋಡಿದಾಗ ಭಾರತ ತಂಡಕ್ಕೆ ಭಾರೀ ಗುರಿ ಬೆನ್ನತ್ತುವಾಗ ಕೊಹ್ಲಿಯಂತ “ಆಧಾರ ಸ್ಥಂಭ”ವೊಂದು ಬೇಕಿದೆ. ಎಂತಹ ಒತ್ತಡದ ಪರಿಸ್ಥಿತಿಯಲ್ಲಿಯೂ ಕೂಡ ಸಮಯೋಚಿತವಾಗಿ ಆಡುವ ಕೌಶಲ್ಯ ಹೊಂದಿದ್ದ ವಿರಾಟ್‌ ಕೊಹ್ಲಿಯಂತಹ ಆಟಗಾರನ ಕೊರತೆ ಭಾರತ ತಂಡದಲ್ಲಿ ಎದ್ದು ಕಾಣುತ್ತಿದೆ.

ಇಂದು ನಡೆದಂತ ಹೆಚ್ಚಿನ ಒತ್ತಡದ ಪಂದ್ಯಗಳಲ್ಲು ಕೂಡ ಕೊಹ್ಲಿಯಂತೆಯೇ ಮನೋಸ್ಥೈರ್ಯದಿಂದ ಆಡುವಂತ ಆಟಗಾರ ಭಾರತ ತಂಡಕ್ಕೆ ಬೇಕಾಗಿದೆ.

Leave a Reply

Your email address will not be published. Required fields are marked *