ಬ್ರೇಕಿಂಗ್
ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ಟ ಸಿದ್ದರಾಮಯ್ಯ: ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಾಯಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಸಿದ್ದರಾಮಯ್ಯ? ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆನೀಟ್‌ನಲ್ಲಿ ಕಡಿಮೆ ಅಂಕ ಭಯ: ಮನೆಬಿಟ್ಟು ಹೋದ ಬಾಲಕ ಸಕಲೇಶಪುರದಲ್ಲಿ ಪತ್ತೆಉಡುಪಿ ಸಿಟಿ ಬಸ್ ನಿಲ್ದಾಣ ಬಳಿಯ ಖಾದರ್ ಬಿಲ್ಡಿಂಗ್ ನಲ್ಲಿ ಭಾರೀ ಅಗ್ನಿ ಅವಘಡ- ಐದಕ್ಕೂ ಹೆಚ್ಚು ಅಂಗಡಿ ಮಳಿಗೆ ಅಗ್ನಿಗಾಹುತಿಶ್ರೀ ಪ್ರಮೋದ್ ಮಧ್ವರಾಜ್ ಅವರ ಜೇಕಬ್ & ಕೋ ರಾಮ ಮಂದಿರ ಎಡಿಷನ್ ವಾಚ್ಕುಂದಾಪುರ | ಬಸ್ ಕಂಡಕ್ಟರ್ ಮಗ ಪ್ರೀತಮ್ ಜಿ. ಪೂಜಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್!ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ಟ ಸಿದ್ದರಾಮಯ್ಯ: ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಾಯಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಸಿದ್ದರಾಮಯ್ಯ? ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆನೀಟ್‌ನಲ್ಲಿ ಕಡಿಮೆ ಅಂಕ ಭಯ: ಮನೆಬಿಟ್ಟು ಹೋದ ಬಾಲಕ ಸಕಲೇಶಪುರದಲ್ಲಿ ಪತ್ತೆಉಡುಪಿ ಸಿಟಿ ಬಸ್ ನಿಲ್ದಾಣ ಬಳಿಯ ಖಾದರ್ ಬಿಲ್ಡಿಂಗ್ ನಲ್ಲಿ ಭಾರೀ ಅಗ್ನಿ ಅವಘಡ- ಐದಕ್ಕೂ ಹೆಚ್ಚು ಅಂಗಡಿ ಮಳಿಗೆ ಅಗ್ನಿಗಾಹುತಿಶ್ರೀ ಪ್ರಮೋದ್ ಮಧ್ವರಾಜ್ ಅವರ ಜೇಕಬ್ & ಕೋ ರಾಮ ಮಂದಿರ ಎಡಿಷನ್ ವಾಚ್ಕುಂದಾಪುರ | ಬಸ್ ಕಂಡಕ್ಟರ್ ಮಗ ಪ್ರೀತಮ್ ಜಿ. ಪೂಜಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್!
August 26, 2026 ಲೈವ್ ಅಪ್‌ಡೇಟ್
KT.Media
ಕರ್ನಾಟಕದ ನಂಬಿಕೆಯ ಡಿಜಿಟಲ್ ಸುದ್ದಿ ವೇದಿಕೆ
ಮೆನು
Live
KT.Media ← ಮುಖಪುಟ
ಮುಖಪುಟ ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದ್ರಾವಿಡ್–ಕುಂಬ್ಳೆ ಹೆಸರಿನ ಸ್ಟ್ಯಾಂಡ್ ಲೋಕಾರ್ಪಣೆ

B
Babu
Feb 14, 2026 · 1 ನಿಮಿಷ

ಸಂಗ್ರಹ ಚಿತ್ರ · KT Media

Spread the love

ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಮಹಾನ್ ಕ್ರಿಕೆಟಿಗರಿಗೆ ಗೌರವ..!

ಬೆಂಗಳೂರು: ಐತಿಹಾಸಿಕ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಅಂತರಾಷ್ಟ್ರೀಯ ಕ್ರಿಕೆಟ್ ತಾಣವಾಗಿ 50 ವರ್ಷ ಪೂರೈಸಿದ ಸುವರ್ಣ ಮಹೋತ್ಸವದ ಅಂಗವಾಗಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಭಾರತದ ಇಬ್ಬರು ದಿಗ್ಗಜ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರ ಹೆಸರನ್ನು ಕ್ರೀಡಾಂಗಣದ ಎರಡು ಸ್ಟ್ಯಾಂಡ್‌ಗಳಿಗೆ ನಾಮಕರಣ ಮಾಡಿ ಗೌರವ ಸಲ್ಲಿಸಿದೆ. ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ನೇತೃತ್ವದ ಸಮಿತಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಭಾವುಕರಾದ ‘ದಿ ವಾಲ್’..!

ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್ ಅತ್ಯಂತ ಭಾವುಕರಾಗಿ,
“ಇದು ನನ್ನ ಎರಡನೇ ಮನೆಯಂತಿದೆ. ನನ್ನ ಮನೆಯಲ್ಲಿ ಕಳೆದ ಸಮಯಕ್ಕಿಂತ ಹೆಚ್ಚು ಸಮಯವನ್ನು ನಾನು ಈ ಮೈದಾನದಲ್ಲೇ ಕಳೆದಿದ್ದೇನೆ. ಇಲ್ಲಿ ಗೆಲುವಿನ ಸಂಭ್ರಮವನ್ನೂ, ಸೋಲಿನ ನಿರಾಸೆಯನ್ನೂ ಕಂಡಿದ್ದೇನೆ. ಇಂದು ನಾನು ಏನಾಗಿದ್ದೇನೋ ಅದಕ್ಕೆ ಈ ಮೈದಾನವೇ ಕಾರಣ,” ಎಂದು ನೆನಪಿಸಿಕೊಂಡರು.

ತಂದೆಯ ನೆನಪು.

ತಮ್ಮ ತಂದೆಯನ್ನು ಸ್ಮರಿಸಿದ ದ್ರಾವಿಡ್,
“ನನ್ನ ತಂದೆಗೆ ಕ್ರಿಕೆಟ್ ಎಂದರೆ ಪಂಚಪ್ರಾಣ. ನಾನು ಚಿಕ್ಕವನಿದ್ದಾಗ ಅವರು ನನ್ನನ್ನು ಇಲ್ಲಿಗೆ ಕರೆತಂದು ಪಂದ್ಯಗಳನ್ನು ತೋರಿಸುತ್ತಿದ್ದರು. ಇಂದು ಅವರ ಮಗನ ಹೆಸರೇ ಇಲ್ಲಿನ ಒಂದು ಸ್ಟ್ಯಾಂಡ್‌ಗೆ ಇಟ್ಟಿರುವುದನ್ನು ನೋಡಲು ಅವರು ಇದ್ದಿದ್ದರೆ ಬಹಳ ಹೆಮ್ಮೆಪಡುತ್ತಿದ್ದರು,” ಎಂದು ಕಣ್ಣೀರಿಟ್ಟರು.

ಕುಂಬ್ಳೆ ಪ್ರತಿಕ್ರಿಯೆ.

ಭಾರತದ ಶ್ರೇಷ್ಠ ಸ್ಪಿನ್ನರ್ ಅನಿಲ್ ಕುಂಬ್ಳೆ ಮಾತನಾಡಿ,
“ಒಂಬತ್ತು ವರ್ಷದ ಬಾಲಕನಾಗಿ ಮೊದಲ ಬಾರಿ ಈ ಕ್ರೀಡಾಂಗಣಕ್ಕೆ ಬಂದಿದ್ದೆ. ಇಂದು ಪೆವಿಲಿಯನ್ ಮೇಲೆ ನನ್ನ ಹೆಸರು ಇರುವುದನ್ನು ನೋಡಿ ಅಪಾರ ಸಂತೋಷವಾಗಿದೆ. ನಮ್ಮ ವೈಯಕ್ತಿಕ ಸಾಧನೆಗಳಿಗಿಂತ ಕರ್ನಾಟಕ ಕ್ರಿಕೆಟ್ ಬೆಳೆದು ಬಂದ ಹಾದಿಯೇ ಮುಖ್ಯ,” ಎಂದು ಅಭಿಪ್ರಾಯಪಟ್ಟರು.

ಶಾಂತ ರಂಗಸ್ವಾಮಿ ಅವರಿಗೆ ಗೌರವ
ಪುರುಷ ಕ್ರಿಕೆಟಿಗರಿಗಷ್ಟೇ ಸೀಮಿತವಾಗದೆ, ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತ ರಂಗಸ್ವಾಮಿ ಅವರ ಹೆಸರನ್ನೂ ಒಂದು ಸ್ಟ್ಯಾಂಡ್‌ಗೆ ಇಡುವ ಮೂಲಕ KSCA ಮಹಿಳಾ ಕ್ರಿಕೆಟ್‌ಗೂ ಸಮಾನ ಗೌರವ ನೀಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಸುವರ್ಣ ಮಹೋತ್ಸವದ ಈ ಐತಿಹಾಸಿಕ ಕ್ಷಣ, ಕರ್ನಾಟಕ ಕ್ರಿಕೆಟ್ ಪರಂಪರೆಯ ಮತ್ತೊಂದು ಮಹತ್ವದ ಅಧ್ಯಾಯವಾಗಿ ದಾಖಲಾಗಲಿದೆ.

Leave a Reply

Your email address will not be published. Required fields are marked *