ಬ್ರೇಕಿಂಗ್
ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ಟ ಸಿದ್ದರಾಮಯ್ಯ: ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಾಯಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಸಿದ್ದರಾಮಯ್ಯ? ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆನೀಟ್‌ನಲ್ಲಿ ಕಡಿಮೆ ಅಂಕ ಭಯ: ಮನೆಬಿಟ್ಟು ಹೋದ ಬಾಲಕ ಸಕಲೇಶಪುರದಲ್ಲಿ ಪತ್ತೆಉಡುಪಿ ಸಿಟಿ ಬಸ್ ನಿಲ್ದಾಣ ಬಳಿಯ ಖಾದರ್ ಬಿಲ್ಡಿಂಗ್ ನಲ್ಲಿ ಭಾರೀ ಅಗ್ನಿ ಅವಘಡ- ಐದಕ್ಕೂ ಹೆಚ್ಚು ಅಂಗಡಿ ಮಳಿಗೆ ಅಗ್ನಿಗಾಹುತಿಶ್ರೀ ಪ್ರಮೋದ್ ಮಧ್ವರಾಜ್ ಅವರ ಜೇಕಬ್ & ಕೋ ರಾಮ ಮಂದಿರ ಎಡಿಷನ್ ವಾಚ್ಕುಂದಾಪುರ | ಬಸ್ ಕಂಡಕ್ಟರ್ ಮಗ ಪ್ರೀತಮ್ ಜಿ. ಪೂಜಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್!ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ಟ ಸಿದ್ದರಾಮಯ್ಯ: ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಾಯಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಸಿದ್ದರಾಮಯ್ಯ? ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆನೀಟ್‌ನಲ್ಲಿ ಕಡಿಮೆ ಅಂಕ ಭಯ: ಮನೆಬಿಟ್ಟು ಹೋದ ಬಾಲಕ ಸಕಲೇಶಪುರದಲ್ಲಿ ಪತ್ತೆಉಡುಪಿ ಸಿಟಿ ಬಸ್ ನಿಲ್ದಾಣ ಬಳಿಯ ಖಾದರ್ ಬಿಲ್ಡಿಂಗ್ ನಲ್ಲಿ ಭಾರೀ ಅಗ್ನಿ ಅವಘಡ- ಐದಕ್ಕೂ ಹೆಚ್ಚು ಅಂಗಡಿ ಮಳಿಗೆ ಅಗ್ನಿಗಾಹುತಿಶ್ರೀ ಪ್ರಮೋದ್ ಮಧ್ವರಾಜ್ ಅವರ ಜೇಕಬ್ & ಕೋ ರಾಮ ಮಂದಿರ ಎಡಿಷನ್ ವಾಚ್ಕುಂದಾಪುರ | ಬಸ್ ಕಂಡಕ್ಟರ್ ಮಗ ಪ್ರೀತಮ್ ಜಿ. ಪೂಜಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್!
July 11, 2026 ಲೈವ್ ಅಪ್‌ಡೇಟ್
KT.Media
ಕರ್ನಾಟಕದ ನಂಬಿಕೆಯ ಡಿಜಿಟಲ್ ಸುದ್ದಿ ವೇದಿಕೆ
ಮೆನು
Live
KT.Media ← ಮುಖಪುಟ
ಮುಖಪುಟ ಕುಂದಾಪುರ

‘ನಮ್ಮ ಕುಂದಾಪುರ’ ಡಾಕ್ಯುಮೆಂಟರಿ ಸಿರೀಸ್ ಟ್ರೈಲರ್ ಮಾರ್ಚ್ 13ಕ್ಕೆ ಬಿಡುಗಡೆ

✍🏻ಅಜ್ಞಾತವಾಸಿ
Mar 9, 2026 · 1 ನಿಮಿಷ

ಸಂಗ್ರಹ ಚಿತ್ರ · KT Media

Spread the love

ಕುಂದಾಪುರದ ಸಂಸ್ಕೃತಿ, ಪರಂಪರೆ ಮತ್ತು ಜೀವನಶೈಲಿಯನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ನಿರ್ಮಾಣವಾಗಿರುವ ‘ನಮ್ಮ ಕುಂದಾಪುರ’ ಎಂಬ ಡಾಕ್ಯುಮೆಂಟರಿ ಸಿರೀಸ್‌ನ ಟ್ರೈಲರ್ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಿಸಲಾಗಿದೆ.

ಈ ಡಾಕ್ಯುಮೆಂಟರಿ ಸಿರೀಸ್‌ನ ಟ್ರೈಲರ್ ಮಾರ್ಚ್ 13 ರಂದು ಬೆಳಿಗ್ಗೆ 11:11ಕ್ಕೆ ಬಿಡುಗಡೆಗೊಳ್ಳಲಿದೆ ಎಂದು ನಿರ್ಮಾಣ ತಂಡವು ಪ್ರಕಟಿಸಿದೆ. ಕುಂದಾಪುರದ ವೈಶಿಷ್ಟ್ಯಮಯ ಸಂಸ್ಕೃತಿ, ಆಚರಣೆಗಳು ಹಾಗೂ ಜನಜೀವನವನ್ನು ಅನಾವರಣಗೊಳಿಸುವ ಈ ಸರಣಿ ಈಗಾಗಲೇ ಸ್ಥಳೀಯರಲ್ಲಿಯೂ ಹಾಗೂ ಕರಾವಳಿ ಭಾಗದ ಪ್ರೇಕ್ಷಕರಲ್ಲಿಯೂ ಹೆಚ್ಚಿನ ಕುತೂಹಲ ಮೂಡಿಸಿದೆ.

ಈ ಡಾಕ್ಯುಮೆಂಟರಿ ಸರಣಿಯನ್ನು ಅಟಲ್ ಎಸ್ ಶೆಟ್ಟಿ ನಿರ್ದೇಶಿಸಿದ್ದಾರೆ. ಟ್ರೈಲರ್‌ಗೆ ಧ್ವನಿವರ್ಣನೆ ವಸಂತ್ ಗಿಳಿಯಾರ್ ನೀಡಿದ್ದಾರೆ. ಟ್ರೈಲರ್ ಸಂಗೀತವನ್ನು ಖ್ಯಾತ ಸಂಗೀತ ನಿರ್ದೇಶಕ ಸಚಿನ್ ಬಸ್ರೂರು ನೀಡಿದ್ದಾರೆ.

ಈ ಪ್ರಾಜೆಕ್ಟ್‌ನಲ್ಲಿ ಕೆ.ಸಿ. ರಾಜೇಶ್, ರಾಜೇಶ್ ಮೈಸೂರು, ದೇವಿಜಾ ಶೆಟ್ಟಿ, ಸೃಜನ್ ಶೆಟ್ಟಿ, ಪ್ರವೀಣ್ ಏಕಾಂಥ, ಶ್ರೇಯ ಶೆಟ್ಟಿ, ಪ್ರಸನ್ನ ಕಿಣಿ, ದೀಪಕ್ ಪೂಜಾರಿ, ಶಮಿತಾ ಶೆಟ್ಟಿ, ಅಶೋಕ್ ಆಚಾರ್ಯ, ಸುಜಿತ್ ಮಂಡಾರ್ತಿ, ಸುಮಂತ್ ಭಟ್, ಪ್ರವೀಣ್ ಯಕ್ಷಿಮಠ, ಶಶಿಕಾಂತ್ ಶೆಟ್ಟಿ ಮತ್ತು ಮನೀಶ್ ಮೊಯ್ಲಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

View this post on Instagram

A post shared by Atal S Shetty (@atalsshetty)

ಕುಂದಾಪುರದ ವೈವಿಧ್ಯಮಯ ಸಂಸ್ಕೃತಿ, ಯಕ್ಷಗಾನ, ಹುಲಿ ವೇಷ, ಕರಾವಳಿ ಜನಜೀವನ ಮತ್ತು ಸಂಪ್ರದಾಯಗಳನ್ನು ಒಳಗೊಂಡಂತೆ ಈ ಸಿರೀಸ್ ರೂಪುಗೊಂಡಿದೆ. ಪೋಸ್ಟರ್‌ನಲ್ಲಿ ಕಾಣುವ ಯಕ್ಷಗಾನ ವೇಷಭೂಷಣ, ಹುಲಿ ವೇಷ ಹಾಗೂ ಗ್ರಾಮೀಣ ಬದುಕಿನ ದೃಶ್ಯಗಳು ಈ ಸರಣಿಯ ವಿಷಯವಸ್ತುವಿನ ವೈಭವವನ್ನು ಸೂಚಿಸುತ್ತಿವೆ.

‘ನಮ್ಮ ಕುಂದಾಪುರ’ ಡಾಕ್ಯುಮೆಂಟರಿ ಸಿರೀಸ್ ಮೂಲಕ ಕರಾವಳಿ ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಗಳನ್ನು ಡಿಜಿಟಲ್ ವೇದಿಕೆಯ ಮೂಲಕ ವಿಶ್ವದ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ.

ಟ್ರೈಲರ್ ಬಿಡುಗಡೆಯ ನಂತರ ಈ ಡಾಕ್ಯುಮೆಂಟರಿ ಸಿರೀಸ್ ಬಗ್ಗೆ ಇನ್ನಷ್ಟು ಮಾಹಿತಿ ಬಹಿರಂಗವಾಗುವ ನಿರೀಕ್ಷೆಯಿದೆ. ಕುಂದಾಪುರ ಹಾಗೂ ಕರಾವಳಿ ಭಾಗದ ಸಂಸ್ಕೃತಿಯನ್ನು ಪ್ರೀತಿಸುವವರಿಗೆ ಈ ಪ್ರಾಜೆಕ್ಟ್ ವಿಶೇಷವಾಗಿರಲಿದೆ.

Leave a Reply

Your email address will not be published. Required fields are marked *